Followers

Tuesday, January 7, 2025

jila panchayat taluka panchayat chunav ane

'ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವಂತೂ ತಯಾರಾಗಿದ್ದೇವೆ' ಎಂದು

ಸಿಎಂ ಸಿದ್ದರಾಮಯ್ಯ ಎರಡು ದಿನದ ಹಿಂದಷ್ಟೇ ಪ್ರತಿಕ್ರಿಯಿಸಿದ್ದರು. ಇದೀಗ ಜನವರಿ 29ರಂದು ಸರ್ಕಾರದ ನಿಲುವು ಸ್ಪಷ್ಟವಾಗಲಿದೆ. ಅಂದು ಸರ್ಕಾರ ತಾನು ಕೈಗೊಂಡಿರುವ ಕ್ರಮವನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಲಿದೆ.

ಈ ಬೆಳವಣಿಗೆಗೆ ಪೂರಕವಾಗಿ, ಚುನಾವಣೆ ಸಂಬಂಧ ಕೋರ್ಟ್ನಲ್ಲಿ ಇರುವ ಪ್ರಕರಣ ಇತ್ಯರ್ಥಕ್ಕೆ ತಕ್ಷಣವೇ ಗಮನ ನೀಡುವುದು, ಚುನಾವಣೆಗೆ ಪೂರಕ ವಾತಾವರಣ ನಿರ್ವಿುಸುವುದು, ಬಜೆಟ್ನಲ್ಲಿ ಈ ನಿಟ್ಟಿನಲ್ಲಿ ಆದ್ಯತೆ, ಮುಖ್ಯವಾಗಿ ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ಮುಗಿದ ಒಂದು ವಾರದ ಬಳಿಕ ಚುನಾವಣೆ ಪ್ರಕ್ರಿಯೆಗೆ ಅವಕಾಶ ಆಗುವಂತೆ ಮಾಡುವ ಕುರಿತು ಸಮಾಲೋಚನೆ ನಡೆದಿವೆ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.

ಅವಧಿ ಮುಗಿದರೂ ಕಳೆದ ನಾಲ್ಕು ವರ್ಷಗಳಿಂದ ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ನಡೆದಿಲ್ಲ ಎಂದು ಚುನಾವಣಾ ಆಯೋಗ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಿಸಿತ್ತು. ಕೋರ್ಟ್ನಲ್ಲಿ ವಿಚಾರಣೆಗೆ ಬಂದಾಗ ಸರ್ಕಾರ ಕಾಲಾವಕಾಶ ಕೋರಿತ್ತು. ಜತೆಗೆ ಚುನಾವಣೆ ನಡೆಸಲು ಮೀಸಲು ಮತ್ತು ಕ್ಷೇತ್ರ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ; ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಹೇಳಿಕೊಂಡಿತ್ತು. ಇದೀಗ ಈ ಕಾರ್ಯ ಮುಗಿದಿದೆ. ಅಧಿಸೂಚನೆ ಪ್ರಕಟವಾಗಬೇಕಾಗಿದೆ. ಈ ನಡುವೆ ಆಯೋಗ ಪುನಃ ಕೋರ್ಟ್ ಕದ ತಟ್ಟಿದ್ದು ಮತ್ತೊಮ್ಮೆ ನಿರ್ದೇಶನ ನೀಡುವಂತೆ ಕೋರಿದೆ. ಜನವರಿ 29ರಂದು ಈ ಪ್ರಕರಣ ವಿಚಾರಣೆಗೆ ಬರುತ್ತಿದ್ದು, ಅಲ್ಲಿ ಸರ್ಕಾರ ತನ್ನ ಅಂತಿಮ ನಿರ್ಧಾರ ತಿಳಿಸಲಿದೆ.

ನಿರ್ಧಾರಕ್ಕೆ ಕಾರಣ?: ಮಾರ್ಚ್- ಏಪ್ರಿಲ್ನಲ್ಲಿ ಬಹುತೇಕ ಪರೀಕ್ಷೆ ಮುಗಿಯುತ್ತವೆ. ಏಪ್ರಿಲ್ನಲ್ಲಿ ಚುನಾವಣೆ ಘೋಷಣೆಯಾದರೆ ಮೇ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬಹುದು, ಹೀಗಾಗಿ ಮೇ ಪ್ರಶಸ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಚುನಾವಣೆ ದಿನಾಂಕ ನಿಗದಿ ಮಾಡುವುದು ಆಯೋಗವಾದರೂ ಈ ಅವಧಿಗೆ ಪೂರಕ ವಾತಾವರಣವನ್ನು ಸರ್ಕಾರ ಸೃಷ್ಟಿಸಿಕೊಡಬೇಕೆಂಬ ತೀರ್ವನಕ್ಕೆ ಬರಲಾಗಿದೆ.

ಮೀಸಲು ಪ್ರಕಟ ಬಾಕಿ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮೀಸಲು ಹಂಚಿಕೆ ಪ್ರಕ್ರಿಯೆ ನಡೆಯಬೇಕು. ಮೀಸಲು ಪಟ್ಟಿ ಸಿದ್ಧವಾಗಿದ್ದು ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಂದಿದೆ. ಮುಖ್ಯಮಂತ್ರಿ ಸೂಚನೆ ಬರುತ್ತಿದ್ದಂತೆ ಸಚಿವರ ಸಹಿ ಬೀಳಲಿದ್ದು, ಕರಡು ಪ್ರಕಟಣೆ ಹೊರಬೀಳಲಿದೆ. ನಂತರ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ಅಂತಿಮ ಪಟ್ಟಿ ಪ್ರಕಟಿಸಿದ ಬಳಿಕ ಆಯೋಗವು ಆ ಪಟ್ಟಿಯನ್ನು ಆಧರಿಸಿ ಪ್ರಕ್ರಿಯೆ ನಡೆಸಲು ಒಂದೂವರೆ ತಿಂಗಳು ಕಾಲಾವಕಾಶ ತೆಗೆದುಕೊಂಡು ನಂತರದಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡಲಿದೆ.

ಬಿಬಿಎಂಪಿ ಚುನಾವಣೆಗೆ ಬಗ್ಗೆ ನಿರಾಸಕ್ತಿ?: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವಿಚಾರದಲ್ಲಿ ಸರ್ಕಾರದಲ್ಲಿ ನಿಲುವು ಸ್ಪಷ್ಟವಾಗಿಲ್ಲ. ಬಿಬಿಎಂಪಿ ವಿಭಜನೆ ಆಗಬೇಕೆಂಬ ಬಗ್ಗೆ ಪಕ್ಷದ ಶಾಸಕರಲ್ಲೇ ಒಮ್ಮತ ಇಲ್ಲ. ಹೀಗಾಗಿ ಅವರನ್ನೆಲ್ಲ ಮುಂಬರುವ ಬಜೆಟ್ ಅಧಿವೇಶನದ ವೇಳೆಗೆ ಒಟ್ಟಿಗೆ ಸೇರಿಸಿ ಒಮ್ಮತಕ್ಕೆ ತರುವ ಪ್ರಯತ್ನ ನಡೆಯಲಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯಿತಿ: 31
ತಾಲೂಕು ಪಂಚಾಯಿತಿ: 239
ತಾ.ಪಂ. ಸ್ಥಾನಗಳು: 3903
ಜಿ.ಪಂ. ಸ್ಥಾನಗಳು: 1083
ಅಂದಾಜು ಮತದಾರು: 3 ಕೋಟಿ
ಆತನ ವರ್ತನೆಯಿಂದಲೇ ತಂಡ ಒತ್ತಡಕ್ಕೆ ಸಿಲುಕಲು ಪ್ರಮುಖ ಕಾರಣ; Virat Kohli ಕುರಿತು ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

ಶಬ್ದಗಳಿಗಿಂತ ಅದನ್ನು ಕೇಳುವವರಿಗೆ… ವಿಚ್ಛೇದನ ವದಂತಿ ನಡುವೆ Yuzvendra Chahal ಮತ್ತೊಂದು ಪೋಸ್ಟ್ ವೈರಲ್

ಮಾಹಿತಿಗಾಗಿ

*ಮಾಹಿತಿಗಾಗಿ*

*ಈ ವರ್ಷದ ತೆರಿಗೆ ( ಟ್ಯಾಕ್ಸ್) ವಿಚಾರವಾಗಿ ನೀವು ತಿಳಿದುಕೊಂಡಿರಬೇಕಾದ ಕೆಲವು  ಅಂಶಗಳು : -*

*ಈವರ್ಷ ಸುಮಾರು ಶೇ 95%* ಜನ ಶಿಕ್ಷಕರು ತೆರಿಗೆಗೆ ಒಳಪಡುತ್ತಾರೆ.*. ಏಕೆಂದರೆ ನಾವು ಎಲ್ಲರೂ 7ನೇ ವೇತನ ಪಡಿಯುತ್ತಿದ್ದು ಅದರ ಜೊತೆಗೆ ವಾರ್ಷಿಕ ಬಡ್ತಿ.ಕಾಲಮಿತಿ ಬಡ್ತಿ.  ಪಡೆದಿರುವುದರಿಂದ ತೆರಿಗೆಯನ್ನು ಭರಿಸಬೇಕಾಗುವದು*


*ಕಳೆದ  ವರ್ಷದ ಹಾಗೆ ಈ ವರ್ಷವೂ ಸಹ ಎರಡು ರೀತಿಯ ತೆರಿಗೆ ಲೆಕ್ಕಾಚಾರವಿದೆ.(Old regime.New regime)*


*New Tax Regime* 

*👉ಹೊಸ ತೆರಿಗೆಯಲ್ಲಿ ಯಾವದೇ ಉಳಿತಾಯ ಮಾಡಲು ಬರುವುದಿಲ್ಲ.*

*👉ಒಟ್ಟು ವೇತನ 7 ಲಕ್ಷ ಮತ್ತು 75000 Standard deduction=775000 ರೂ ಆದಾಯ  ಇದ್ದರೆ ತೆರಿಗೆ ಬರುವುದಿಲ್ಲ.*

*👉7.75000 ಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಈ ಕೆಳಗಿನಂತೆ ಆದಾಯ ತೆರಿಗೆಗೆ ಒಳಪಡುತ್ತೀರಿ*

*👉೦-3 ಲಕ್ಷಕ್ಕೆ ತೆರಿಗೆ ಇಲ್ಲ*

*👉3-7 ಲಕ್ಷಕ್ಕೆ 5%. ಅಂದರೆ 20000 ರೂ.ತೆರಿಗೆ ಭರಿಸಬೇಕು.*

*👉7-10 ಲಕ್ಷಕ್ಕೆ 20000+10% (30000) =50000.ರೂ ತೆರಿಗೆ ಭರಿಸಬೇಕು*

 *👉ತೆರಿಗೆ.10-12 ಲಕ್ಷಕ್ಕೆ 50000+ 15% ತೆರಿಗೆ (30000) = 80000 ರೂ ತೆರಿಗೆ ಭರಿಸಬೇಕು.*

*👉12-  15ಲಕ್ಷಕ್ಕೆ 80000ರೂ +20% ತೆರಿಗೆ (60000)  =140000 ರೂ ತೆರಿಗೆ ಭರಿಸಬೇಕು*


*Old Tax Regi‍me*

*🙏ಶಿಕ್ಷಕ ಬಂಧುಗಳ ಆದಾಯ ತೆರಿಗೆ ಲೆಕ್ಕಾಚಾರ ಸರಳಗೊಳಿಸಲು ಸೂಚನೆಗಳು:🙏*


* *ಇದರಲ್ಲಿ 5 ಲಕ್ಷ ಒಳಗಿನ ಆದಾಯಕ್ಕೆ ತೆರಿಗೆ ಬರುವದಿಲ್ಲ.*

* *5-1೦ ಲಕ್ಷ ವರೆಗಿನ ಅದಾಯಕ್ಕೆ 125೦೦+20%(100000)= 112500 ತೆರಿಗೆ ಭರಿಸಬೇಕು*

* *1೦ ಲಕ್ಷ  ಮೇಲ್ಪಟ್ಟ ಆದಾಯಕ್ಕೆ 112500+3೦% ರಷ್ಟು ಕಟ್ಟಬೇಕಾಗುವದು.*

 *ಹಳೆ ಪದ್ದತಿಯಲ್ಲಿ ಉಳಿತಾಯ ಮಾಡಲು ಈ ಕೆಳಗಿನಂತಿವೆ*

* *80C:- (ಈಗಾಗಲೇ ವೇತನದಲ್ಲೇ ಕಟಾವಣೆಗಳ ಒಟ್ಟು ಮೊತ್ತ ರೂ 1,50,000 ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)*
* 1) ಮಕ್ಕಳ ಟ್ಯೂಷನ್ ಫೀ ರಸೀದಿ
* 2) PLI ತುಂಬಿದ ದಾಖಲೆ
* 3) ಕೈಯಿಂದ ತುಂಬುವ      LIC ಕಂತು
* 4) NSC
* 5) ಸುಕನ್ಯಾ ಸಮೃದ್ಧಿ
* 6) ವಾಪಸ್ಸು ತುಂಬಿದ ಗೃಹ ಸಾಲದ ಅಸಲು
•   7) ಇತರೆ

* *80 ಸಿ ಅಡಿ ರೂ. 1,50,000 ಮೀರಿದ್ದರೂ ನೇರವಾಗಿ ಆದಾಯದಲ್ಲಿ ಕಟಾವಣೆಗೆ ಇರುವ ಅವಕಾಶಗಳು*

* *ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್ ನಿಂದ 'Provisional Interest Certificate' ಅಂತಾ ಕೇಳಿ (ಸ್ಟೇಟ್ ಮೆಂಟ್ ಅಂತಾ ಕೇಳಿ ತರಬೇಡಿರಿ) ಪಡೆದುಕೊಂಡು ಪೂರೈಸಿರಿ.*

* *80 D:- ಆರೋಗ್ಯ ವಿಮೆ ಸ್ವಂತ ಹಾಗೂ ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 25000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.,*

* *80 DD:- ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ ಅವಲಂಬಿತರು ವಿಕಲಚೇತನರಾಗಿದ್ದಲ್ಲಿ ಅವರ ವೈಕಲ್ಯ ಪ್ರಮಾಣ ಶೇ 40-79 ಇದ್ದಲ್ಲಿ ಗರಿಷ್ಠ ರೂ 75,000 ಅಥವಾ ಶೇ 80 ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ ರೂ 1,25,000 ಆದಾಯದಿಂದ ಕಳೆಯಲ್ಪಡುತ್ತದೆ.*

* *80 DDB:- ನಿರ್ಧಾರಿತ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ಧಾರಿತ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಲ್ಲಿ ರಸೀದಿಗಳು ಹಾಗೂ  ಹಾಗೂ ಎಂ.ಡಿ ಅಥವಾ ಎಂ.ಎಸ್ ಪದವಿ ಹೊಂದಿದ ವೈದ್ಯರಿಂದ '10 - I' ಪ್ರ.ಪತ್ರ ಪಡೆದು ಸಲ್ಲಿಸಬೇಕು. ಆ ನಿರ್ಧಾರಿತ ರೋಗಗಳ ಪಟ್ಟಿ ಈ ಕೆಳಗಿನಂತೆ ಇದೆ, ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಈ ಕೆಳಗಿನ ಚಿಕಿತ್ಸೆ ಗೆ ಮಾತ್ರ*

* (i)   Neurological Diseases where the disability level has been certified to be of 40% and above,—
* (a)   Dementia ;
* (b)   Dystonia Musculorum Deformans ;
* (c)   Motor Neuron Disease ;
* (d)   Ataxia ;
* (e)   Chorea ;
* (f)   Hemiballismus ;
* (g)   Aphasia ;
* (h)   Parkinsons Disease ;
* (ii)   Malignant Cancers ;
* (iii)   Full Blown Acquired Immuno-Deficiency Syndrome (AIDS) ;
* (iv)   Chronic Renal failure ;
* (v)   Hematological disorders :
* (i)   Hemophilia ;
* (ii)   Thalassaemia.

* *80 CCD 1(B):- NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ. ವೇತನದಲ್ಲಿ ಕಟಾವಣೆಯಾಗುವ ಮೊತ್ತವಲ್ಲದೇ ಎನ್.ಪಿ.ಎಸ್ ಗೆ ಹೆಚ್ಚುವರಿಯಾಗಿ ಹಣ ತುಂಬಿದ್ದರೆ ಗರಿಷ್ಠ ರೂ 50000 ವರೆಗೆ ವಿನಾಯಿತಿ ಇದೆ.*

* *80 E:- ಶಿಕ್ಷಣ ಸಾಲದ ಬಡ್ಡಿ ನೌಕರನು ತನ್ನ ಹಾಗೂ ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದ್ದರೆ ಅದಕ್ಕೆ ವಿನಾಯಿತಿ ಸಿಗುತ್ತದೆ.* 

* *80 G:- ದೇಣಿಗೆ/ದಾನ ಕ್ಕೆ ವಿನಾಯಿತಿ. ಆದಾಯ  ಇಲಾಖೆಯಲ್ಲಿ 80ಜಿ ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣಪತ್ರ ಹೊಂದಿರುವ ಟ್ರಸ್ಟ್ / ಸಂಸ್ಥೆಗಳಿಗೆ ದಾನ ನೀಡಿದ್ದರೆ ಗರಿಷ್ಟ ಒಟ್ಟು ವೇತನದ ಶೇ 10 ಕ್ಕೆ ವಿನಾಯಿತಿ ಸಿಗುತ್ತದೆ.*
* *ಸರಕಾರೇತರ ಟ್ರಸ್ಟ್ ಗಳಿಗೆ ನೀಡಿರುವ ದೇಣಿಗೆಯ ಶೇ 50 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.*
* *ಸರಕಾರಿ ನಿಧಿಗಳಾಗಿದ್ದಲ್ಲಿ ನೀಡಿರುವ ದೇಣಿಗೆಯ ಶೇ 100 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.*  
*   *ರೂ 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿ.ಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ** 
*  *80 U:- ಸ್ವತಃ ನೌಕರನೇ ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಪೂರೈಸಿರಿ.*

* *HRA ಮನೆ ಬಾಡಿಗೆ ತೆಗೆದುಕೊಳ್ಳಬಹುದು.ಆದರೆ ಈ ವರ್ಷ ಹಳೆ ಪದ್ಧತಿಯಲ್ಲಿ ಹೆಚ್ಚು ತೆರಿಗೆ ಬರುವುದರಿಂದ ಹೆಚ್ಚಿನವರಿಗೆ ಮನೆ ಬಾಡಿಗೆ (HRA) ಉಪಯೋಗವಾಗುವು ದಿಲ್ಲ.*

Money: ತೆರಿಗೆ ಇಲ್ಲದೇ 85000 ರೂಪಾಯಿ ಆದಾಯ ಹೀಗೆ ಪಡೆಯಿರಿ!

ಪಿಪಿಎಫ್‌ನಲ್ಲಿ ನಿಮಗೆ 7.1 ಬಡ್ಡಿ ದರ ಸಿಗುತ್ತದೆ. ಇದನ್ನು ತೆರೆಯವುದು ಕೂಡ ಸುಲಭ. ಯಾರಾದರೂ ಕೇವಲ 500 ರೂಪಾಯಿಯೊಂದಿಗೆ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಈ ಖಾತೆಯನ್ನು ತೆರೆಯಬಹುದು.

ಈ ಯೋಜನೆಯಲ್ಲಿ ನೀವು ತಿಂಗಳಿಗೆ 85 ಸಾವಿರ ರೂಪಾಯಿ ಬಡ್ಡಿ ಕೂಡ ಗಳಿಸಬಹುದು. ಹೇಗೆ ಅಂತಾ ನೋಡೋ ಮುನ್ನ ಈ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಪಿಪಿಎಫ್‌ ಯೋಜನೆ

ಸಾರ್ವಜನಿಕ ಭವಿಷ್ಯ ನಿಧಿಯು ನಿವೃತ್ತಿ-ಕೇಂದ್ರಿತ ಯೋಜನೆಯಾಗಿದ್ದು, ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊ ವೈವಿಧ್ಯೀಕರಣಕ್ಕಾಗಿ ಬಳಸುತ್ತಾರೆ. ಒಬ್ಬರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಇದು ವ್ಯಕ್ತಿಗಳಿಗೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಖಾತರಿಪಡಿಸಿದ ರಿಟರ್ನ್ಸ್ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.

ಸಣ್ಣ ಉಳಿತಾಯ ಯೋಜನೆಯು ವೇತನದಾರರು ಮತ್ತು ಸ್ವಯಂ ಉದ್ಯೋಗಿ ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ. ಅಪ್ರಾಪ್ತ ವಯಸ್ಕರರ ಪೋಷಕರು ಕೂಡ ಮಕ್ಕಳ ಹೆಸರಲ್ಲಿ ಈ ಖಾತೆಯನ್ನು ತೆರೆಯಬಹುದು.

ಪಿಪಿಎಫ್‌ ಖಾತೆಯ ಮೆಚ್ಯುರಿಟಿ ಅವಧಿ

ಮೆಚುರಿಟಿ ಅವಧಿಯು 15 ವರ್ಷಗಳಾಗಿದ್ದು, 15 ವರ್ಷಗಳ ನಂತರ, ಖಾತೆದಾರರು ತಲಾ 5 ವರ್ಷಗಳ ಅನಿಯಮಿತ ಬ್ಲಾಕ್‌ಗಳಿಗೆ ಖಾತೆಯನ್ನು ವಿಸ್ತರಿಸಬಹುದು.

ಕನಿಷ್ಠ-ಗರಿಷ್ಠ ಹೂಡಿಕೆ

ಈ ಖಾತೆಯನ್ನು ತೆರೆಯುವಾಗ ನೀವು ಕೇವಲ 500 ರೂಪಾಯಿಯಿಂದ ಆರಂಭಿಸಿ, ಗರಿಷ್ಠ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು.

ತೆರಿಗೆ ಪ್ರಯೋಜನಗಳು

ಪಿಪಿಎಫ್‌ನಲ್ಲಿ ರೂ 1.5 ಲಕ್ಷದವರೆಗಿನ ಕೊಡುಗೆಗಳಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಯಾವುದೇ ತೆರಿಗೆ ಬರುವುದಿಲ್ಲ. ಇಲ್ಲಿ ಗಳಿಸಿದ ಬಡ್ಡಿ ಮತ್ತು ಕಾರ್ಪಸ್ ಸಹ ತೆರಿಗೆ ಮುಕ್ತವಾಗಿರುತ್ತದೆ.

ಮೆಚುರಿಟಿ ಅವಧಿಯ ಮೊದಲು ಪಿಪಿಎಫ್‌ ಮೊತ್ತವನ್ನು ಹಿಂಪಡೆಯಬಹುದೇ?

ಪಿಪಿಎಫ್‌ ಖಾತೆದಾರರಿಗೆ 5 ವರ್ಷಗಳ ನಂತರ ಹಣಕಾಸು ವರ್ಷದಲ್ಲಿ ಒಂದು ಬಾರಿ ಹಿಂಪಡೆಯಲು ಅನುಮತಿ ಇರುತ್ತದೆ.

15 ವರ್ಷಗಳ ನಂತರ ಏನಾಗುತ್ತದೆ ನಿಮ್ಮ ಪಿಪಿಎಫ್‌ ಖಾತೆ?

ಮುಕ್ತಾಯದ ಅವಧಿಯ 15 ವರ್ಷಗಳ ನಂತರ, ಹೂಡಿಕೆದಾರರು ಠೇವಣಿಗಳೊಂದಿಗೆ ಅಥವಾ ಇಲ್ಲದೆ ತಮ್ಮ ಖಾತೆಗಳನ್ನು ಮುಂದುವರಿಸಬಹುದು.

ಪಿಪಿಎಫ್‌ ಯೋಜನೆಯಲ್ಲಿ ತಿಂಗಳಿಗೆ 85,000 ರೂಪಾಯಿ ಆದಾಯ ಪಡೆಯುವುದು ಹೇಗೆ?

ಪಿಪಿಎಫ್‌ ಹೂಡಿಕೆ ಯೋಜನೆಯಲ್ಲಿ ನೀವು ತಿಂಗಳಿಗೆ 85,000 ರೂಪಾಯಿ ಗಳಿಸಬೇಕು ಅಂದರೆ, ಪ್ರತಿ ಹಣಕಾಸು ವರ್ಷದಲ್ಲಿ ರೂ 1.50 ಲಕ್ಷ ಹೂಡಿಕೆಯೊಂದಿಗೆ ಪ್ರಾರಂಭಿಸಬೇಕು ಮತ್ತು 15 ವರ್ಷಗಳ ಮೆಚುರಿಟಿ ಅವಧಿಯವರೆಗೆ ಅದನ್ನು ಮುಂದುವರಿಸಬೇಕು. ಬಡ್ಡಿಯ ಗರಿಷ್ಠ ಲಾಭವನ್ನು ಪಡೆಯಲು, ಪ್ರತಿ ಹಣಕಾಸು ವರ್ಷದಲ್ಲಿ ಏಪ್ರಿಲ್ 1-5 ರ ನಡುವೆ ಹೂಡಿಕೆ ಮಾಡಬೇಕು.

15 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್

15 ವರ್ಷಗಳಲ್ಲಿ‌ ನಿಮ್ಮ ಹೂಡಿಕೆಯ ಮೊತ್ತವು ರೂ 22,50,000 ಆಗಿರುತ್ತದೆ, ಇದರಲ್ಲಿ ಅಂದಾಜು ಬಡ್ಡಿ ರೂ 18,18,209 ಆಗಿರುತ್ತದೆ ಮತ್ತು ಅಂದಾಜು ಮೆಚ್ಯೂರಿಟಿ ರೂಪಾಯಿ 40,68,209 ಆಗಿರುತ್ತದೆ.

15 ವರ್ಷಗಳ ನಂತರ ಹೂಡಿಕೆದಾರರು ಮತ್ತೆ 5 ವರ್ಷಗಳ ವಿಸ್ತರಣೆಯನ್ನು ತೆಗೆದುಕೊಳ್ಳಬಹುದು ಮತ್ತು ಮೊದಲಿನ ರೀತಿಯಲ್ಲಿಯೇ ವರ್ಷಕ್ಕೆ 1.50 ಲಕ್ಷ ರೂ. ಹೂಡಿಕೆ ಮಾಡಿ ಆರಂಭಿಸಬಹುದು.

20 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್

20 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 30,00,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 36,58,288 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 66,58,288 ಆಗಿರುತ್ತದೆ. ಈ ಹಂತದಲ್ಲೂ, ಹೂಡಿಕೆದಾರರು ಖಾತೆ ವಿಸ್ತರಣೆಯನ್ನು ತೆಗೆದುಕೊಳ್ಳಬಹುದು

25 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್

25 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 37,50,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 99,26,621 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 1,03,08,015 ಆಗಿರುತ್ತದೆ.

29 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್ ‌

29 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 43,50,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 99,26,621 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 1,42,76,621 ಆಗಿರುತ್ತದೆ.

29 ವರ್ಷಗಳ ಹೂಡಿಕೆಯ ನಂತರ ಮುಂದೇನು?

ಇಲ್ಲಿಂದ ಮುಂದೆ, ಹೂಡಿಕೆದಾರರು ಸಂಪೂರ್ಣ ಕಾರ್ಪಸ್ ಮೇಲಿನ ಬಡ್ಡಿಯನ್ನು ಹಿಂಪಡೆಯಲು ಪ್ರಾರಂಭಿಸಬಹುದು. ವಿಸ್ತರಣೆಗಳ ಸಮಯದಲ್ಲಿ, ಖಾತೆದಾರರಿಗೆ ವರ್ಷಕ್ಕೊಮ್ಮೆ ಬಡ್ಡಿ ಮೊತ್ತವನ್ನು ಹಿಂಪಡೆಯಲು ಅನುಮತಿಸಲಾಗಿದೆ.

ನಿಮ್ಮ ಬಡ್ಡಿ ಮೊತ್ತ ಎಷ್ಟು?

7.1 ರಷ್ಟು ಬಡ್ಡಿ ದರದಲ್ಲಿ, ಒಂದು ವರ್ಷದಲ್ಲಿ ಬಡ್ಡಿಯು 10,13,640 ರೂ ಆಗಿರುತ್ತದೆ, ಅಂದರೆ ತಿಂಗಳಿಗೆ ಇಲ್ಲಿ ನಿಮಗೆ 85,000 ರೂಪಾಯಿ ಸಿಗುತ್ತದೆ.

jila panchayat taluka panchayat chunav ane

'ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವಂತೂ ತಯಾರಾಗಿದ್ದೇವೆ' ಎಂದು ಸಿಎಂ ಸಿದ್ದರಾಮ...