uppar community karnataka
UPPAR IS ONE COMMUNITY OF C1 IN KARNATAKA STATE
Followers
Tuesday, January 7, 2025
jila panchayat taluka panchayat chunav ane
ಮಾಹಿತಿಗಾಗಿ
Money: ತೆರಿಗೆ ಇಲ್ಲದೇ 85000 ರೂಪಾಯಿ ಆದಾಯ ಹೀಗೆ ಪಡೆಯಿರಿ!
ಪಿಪಿಎಫ್ನಲ್ಲಿ ನಿಮಗೆ 7.1 ಬಡ್ಡಿ ದರ ಸಿಗುತ್ತದೆ. ಇದನ್ನು ತೆರೆಯವುದು ಕೂಡ ಸುಲಭ. ಯಾರಾದರೂ ಕೇವಲ 500 ರೂಪಾಯಿಯೊಂದಿಗೆ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ನಲ್ಲಿ ಈ ಖಾತೆಯನ್ನು ತೆರೆಯಬಹುದು.
ಈ ಯೋಜನೆಯಲ್ಲಿ ನೀವು ತಿಂಗಳಿಗೆ 85 ಸಾವಿರ ರೂಪಾಯಿ ಬಡ್ಡಿ ಕೂಡ ಗಳಿಸಬಹುದು. ಹೇಗೆ ಅಂತಾ ನೋಡೋ ಮುನ್ನ ಈ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.
ಪಿಪಿಎಫ್ ಯೋಜನೆ
ಸಾರ್ವಜನಿಕ ಭವಿಷ್ಯ ನಿಧಿಯು ನಿವೃತ್ತಿ-ಕೇಂದ್ರಿತ ಯೋಜನೆಯಾಗಿದ್ದು, ಹೂಡಿಕೆದಾರರು ತಮ್ಮ ಪೋರ್ಟ್ಫೋಲಿಯೊ ವೈವಿಧ್ಯೀಕರಣಕ್ಕಾಗಿ ಬಳಸುತ್ತಾರೆ. ಒಬ್ಬರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಇದು ವ್ಯಕ್ತಿಗಳಿಗೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಖಾತರಿಪಡಿಸಿದ ರಿಟರ್ನ್ಸ್ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.
ಸಣ್ಣ ಉಳಿತಾಯ ಯೋಜನೆಯು ವೇತನದಾರರು ಮತ್ತು ಸ್ವಯಂ ಉದ್ಯೋಗಿ ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ. ಅಪ್ರಾಪ್ತ ವಯಸ್ಕರರ ಪೋಷಕರು ಕೂಡ ಮಕ್ಕಳ ಹೆಸರಲ್ಲಿ ಈ ಖಾತೆಯನ್ನು ತೆರೆಯಬಹುದು.
ಪಿಪಿಎಫ್ ಖಾತೆಯ ಮೆಚ್ಯುರಿಟಿ ಅವಧಿ
ಮೆಚುರಿಟಿ ಅವಧಿಯು 15 ವರ್ಷಗಳಾಗಿದ್ದು, 15 ವರ್ಷಗಳ ನಂತರ, ಖಾತೆದಾರರು ತಲಾ 5 ವರ್ಷಗಳ ಅನಿಯಮಿತ ಬ್ಲಾಕ್ಗಳಿಗೆ ಖಾತೆಯನ್ನು ವಿಸ್ತರಿಸಬಹುದು.
ಕನಿಷ್ಠ-ಗರಿಷ್ಠ ಹೂಡಿಕೆ
ಈ ಖಾತೆಯನ್ನು ತೆರೆಯುವಾಗ ನೀವು ಕೇವಲ 500 ರೂಪಾಯಿಯಿಂದ ಆರಂಭಿಸಿ, ಗರಿಷ್ಠ 1.5 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು.
ತೆರಿಗೆ ಪ್ರಯೋಜನಗಳು
ಪಿಪಿಎಫ್ನಲ್ಲಿ ರೂ 1.5 ಲಕ್ಷದವರೆಗಿನ ಕೊಡುಗೆಗಳಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಯಾವುದೇ ತೆರಿಗೆ ಬರುವುದಿಲ್ಲ. ಇಲ್ಲಿ ಗಳಿಸಿದ ಬಡ್ಡಿ ಮತ್ತು ಕಾರ್ಪಸ್ ಸಹ ತೆರಿಗೆ ಮುಕ್ತವಾಗಿರುತ್ತದೆ.
ಮೆಚುರಿಟಿ ಅವಧಿಯ ಮೊದಲು ಪಿಪಿಎಫ್ ಮೊತ್ತವನ್ನು ಹಿಂಪಡೆಯಬಹುದೇ?
ಪಿಪಿಎಫ್ ಖಾತೆದಾರರಿಗೆ 5 ವರ್ಷಗಳ ನಂತರ ಹಣಕಾಸು ವರ್ಷದಲ್ಲಿ ಒಂದು ಬಾರಿ ಹಿಂಪಡೆಯಲು ಅನುಮತಿ ಇರುತ್ತದೆ.
15 ವರ್ಷಗಳ ನಂತರ ಏನಾಗುತ್ತದೆ ನಿಮ್ಮ ಪಿಪಿಎಫ್ ಖಾತೆ?
ಮುಕ್ತಾಯದ ಅವಧಿಯ 15 ವರ್ಷಗಳ ನಂತರ, ಹೂಡಿಕೆದಾರರು ಠೇವಣಿಗಳೊಂದಿಗೆ ಅಥವಾ ಇಲ್ಲದೆ ತಮ್ಮ ಖಾತೆಗಳನ್ನು ಮುಂದುವರಿಸಬಹುದು.
ಪಿಪಿಎಫ್ ಯೋಜನೆಯಲ್ಲಿ ತಿಂಗಳಿಗೆ 85,000 ರೂಪಾಯಿ ಆದಾಯ ಪಡೆಯುವುದು ಹೇಗೆ?
ಪಿಪಿಎಫ್ ಹೂಡಿಕೆ ಯೋಜನೆಯಲ್ಲಿ ನೀವು ತಿಂಗಳಿಗೆ 85,000 ರೂಪಾಯಿ ಗಳಿಸಬೇಕು ಅಂದರೆ, ಪ್ರತಿ ಹಣಕಾಸು ವರ್ಷದಲ್ಲಿ ರೂ 1.50 ಲಕ್ಷ ಹೂಡಿಕೆಯೊಂದಿಗೆ ಪ್ರಾರಂಭಿಸಬೇಕು ಮತ್ತು 15 ವರ್ಷಗಳ ಮೆಚುರಿಟಿ ಅವಧಿಯವರೆಗೆ ಅದನ್ನು ಮುಂದುವರಿಸಬೇಕು. ಬಡ್ಡಿಯ ಗರಿಷ್ಠ ಲಾಭವನ್ನು ಪಡೆಯಲು, ಪ್ರತಿ ಹಣಕಾಸು ವರ್ಷದಲ್ಲಿ ಏಪ್ರಿಲ್ 1-5 ರ ನಡುವೆ ಹೂಡಿಕೆ ಮಾಡಬೇಕು.
15 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
15 ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಮೊತ್ತವು ರೂ 22,50,000 ಆಗಿರುತ್ತದೆ, ಇದರಲ್ಲಿ ಅಂದಾಜು ಬಡ್ಡಿ ರೂ 18,18,209 ಆಗಿರುತ್ತದೆ ಮತ್ತು ಅಂದಾಜು ಮೆಚ್ಯೂರಿಟಿ ರೂಪಾಯಿ 40,68,209 ಆಗಿರುತ್ತದೆ.
15 ವರ್ಷಗಳ ನಂತರ ಹೂಡಿಕೆದಾರರು ಮತ್ತೆ 5 ವರ್ಷಗಳ ವಿಸ್ತರಣೆಯನ್ನು ತೆಗೆದುಕೊಳ್ಳಬಹುದು ಮತ್ತು ಮೊದಲಿನ ರೀತಿಯಲ್ಲಿಯೇ ವರ್ಷಕ್ಕೆ 1.50 ಲಕ್ಷ ರೂ. ಹೂಡಿಕೆ ಮಾಡಿ ಆರಂಭಿಸಬಹುದು.
20 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
20 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 30,00,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 36,58,288 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 66,58,288 ಆಗಿರುತ್ತದೆ. ಈ ಹಂತದಲ್ಲೂ, ಹೂಡಿಕೆದಾರರು ಖಾತೆ ವಿಸ್ತರಣೆಯನ್ನು ತೆಗೆದುಕೊಳ್ಳಬಹುದು
25 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
25 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 37,50,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 99,26,621 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 1,03,08,015 ಆಗಿರುತ್ತದೆ.
29 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್
29 ವರ್ಷಗಳಲ್ಲಿ, ಒಟ್ಟು ಹೂಡಿಕೆಯು 43,50,000 ರೂ ಆಗಿರುತ್ತದೆ, ಅಂದಾಜು ಬಡ್ಡಿಯು ರೂ 99,26,621 ಆಗಿರುತ್ತದೆ ಮತ್ತು ಅಂದಾಜು ಕಾರ್ಪಸ್ ರೂ 1,42,76,621 ಆಗಿರುತ್ತದೆ.
29 ವರ್ಷಗಳ ಹೂಡಿಕೆಯ ನಂತರ ಮುಂದೇನು?
ಇಲ್ಲಿಂದ ಮುಂದೆ, ಹೂಡಿಕೆದಾರರು ಸಂಪೂರ್ಣ ಕಾರ್ಪಸ್ ಮೇಲಿನ ಬಡ್ಡಿಯನ್ನು ಹಿಂಪಡೆಯಲು ಪ್ರಾರಂಭಿಸಬಹುದು. ವಿಸ್ತರಣೆಗಳ ಸಮಯದಲ್ಲಿ, ಖಾತೆದಾರರಿಗೆ ವರ್ಷಕ್ಕೊಮ್ಮೆ ಬಡ್ಡಿ ಮೊತ್ತವನ್ನು ಹಿಂಪಡೆಯಲು ಅನುಮತಿಸಲಾಗಿದೆ.
ನಿಮ್ಮ ಬಡ್ಡಿ ಮೊತ್ತ ಎಷ್ಟು?
7.1 ರಷ್ಟು ಬಡ್ಡಿ ದರದಲ್ಲಿ, ಒಂದು ವರ್ಷದಲ್ಲಿ ಬಡ್ಡಿಯು 10,13,640 ರೂ ಆಗಿರುತ್ತದೆ, ಅಂದರೆ ತಿಂಗಳಿಗೆ ಇಲ್ಲಿ ನಿಮಗೆ 85,000 ರೂಪಾಯಿ ಸಿಗುತ್ತದೆ.
Sunday, December 29, 2024
ಪ್ರಯತ್ನಿಸಿ
1 https://t.me/kestkannada
2 K set examination📲
Kset full information
https://t.me/kestkannada
3 https://t.me/somalingmuppar
4 https://t.me/bcwdkalaburagi
5 ಗ್ರಾಮ ಪಂಚಾಯತಿ ಕವಲಗಾ
Kawalga in Aland taluk kalaburagi district
https://t.me/Grampanchayatkawalga
6 ಸೋಮು ಮಾಹಿತಿ ವೇದಿಕೆ
ಕನ್ನಡದಲ್ಲಿ
https://t.me/somalingmuppa
7. https://kawalgasomu.blogspot.com/?m=1
8 https://somalingmuppar76.blogspot.com/?m=1&zx=8ea9acdcb00f4100
9 http://somalingmuppark76.blogspot.com/?m=1
10 https://bcwdhostel.blogspot.com/?m=1
11 http://upparcommunitykar.blogspot.com/
12 https://youtube.com/channel/UCPJZtsdMQ_Zx9a9kqNx3nnQ
13 https://youtube.com/c/somalinguppar9008032272
Saturday, December 14, 2024
pm kisan mandhan yojana: ಈ ಸರ್ಕಾರಿ ಯೋಜನೆ ಮೂಲಕ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಿರಿ
pm kisan mandhan yojana: ಈ ಸರ್ಕಾರಿ ಯೋಜನೆ ಮೂಲಕ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಿರಿ
ಕೇಂದ್ರ ಸರ್ಕಾರವು ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಪ್ರಾರಂಭಿಸುತ್ತದೆ. ಇನ್ನು ಕೇಂದ್ರ ಸರ್ಕಾರವು ಈಗಾಗಲೇ ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳಲ್ಲಿ ಪಿಎಂ ಕಿಸಾನ್ ಮಾನ್-ಧನ್ ಯೋಜನೆ ಕೂಡ ಒಂದಾಗಿದೆ.
ಇದರ ಪ್ರಕಾರ ರೈತರು ಪ್ರತಿ ತಿಂಗಳು 55 ರೂ ಠೇವಣಿ ಮಾಡಬೇಕಿದ್ದು, ಬಳಿಕ ವ್ಯಕ್ತಿಗೆ 60 ವರ್ಷ ತುಂಬಿದ ಬಳಿಕ ಪ್ರತೀ ತಿಂಗಳು 3000 ಸಾವಿರ ರೂ. ಮಾಸಿಕ ಪಿಂಚಣಿ ವ್ಯವಸ್ಥೆ ಪಡೆಯಲು ಅರ್ಹರಾಗುತ್ತಾರೆ.
ಯಾವ ಆರಂಭವಾಗಿದ್ದ ಯೋಜನೆ
ಪ್ರಧಾನ ಮಂತ್ರಿ ಕಿಸಾನ್ ಮಾನ್-ಧನ್ ಯೋಜನೆ (PMKMY) ಅನ್ನು 12 ಸೆಪ್ಟೆಂಬರ್ 2019 ರಂದು ಪ್ರಾರಂಭಿಸಲಾಗಿತ್ತು. ಬಡ ರೈತರಿಗೆ ವೃದ್ಧಾಪ್ಯದಲ್ಲಿ ನೆರವಾಗುವುದು ಇದರ ಮುಖ್ಯ ಉದ್ದೇಶವಾಗಿದೆ. ಅವರ ಖಾತೆಗೆ ಪ್ರತಿ ತಿಂಗಳು ನಿಗದಿತ ಹಣ ಬರುತ್ತದೆ. ಯಾವುದೇ ಸಣ್ಣ ಮತ್ತು ಅತಿಸಣ್ಣ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಈ ಯೋಜನೆಯ ಲಾಭ ಪಡೆಯಲು ರೈತರು ಪ್ರತೀ ತಿಂಗಳು 55 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ಜೊತೆಯಾಗಿ ಠೇವಣಿ ಮಾಡುತ್ತಾರೆ. ಹೀಗೆ ಒಟ್ಟಾಗಿ ಎರಡೂ ಕಡೆಗಳಿಂದ ಒಟ್ಟು 110 ರೂ. ಮೊತ್ತವು ಠೇವಣಿ ಮಾಡಿದಂತಾಗುತ್ತದೆ.
ಯಾರೆಲ್ಲಾ ಇದರ ಲಾಭ ಪಡೆಯಬಹುದು?
ಇನ್ನು ಈ ಯೋಜನೆಯ ಲಾಭವನ್ನು ಸರ್ಕಾರವು ಹಲವು ಇತರೆ ವಿಭಾಗಗಳಿಗೂ ವಿಸ್ತರಿಸಿಕೊಂಡಿದೆ. ಅಂದರೆ ಚಾಲಕ ರಿಕ್ಷಾ ಎಳೆಯುವವನು, ಚಮ್ಮಾರ, ಟೈಲರ್, ಕಾರ್ಮಿಕ, ಮನೆ ಕೆಲಸಗಾರರು ಕೂಡ ಇದರ ಲಾಭ ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
ಒಂದು ವೇಳೆ ಮರಣ ಸಂಭವಿಸಿದರೆ?
ಒಂದು ವೇಳೆ ಮರಣ ಸಂಭವಿಸಿದರೆ?
ಇನ್ನು ಒಂದು ವೇಳೆ ಫಲಾನುಭವಿಯು ಒಂದು ವೇಳೆ ಹಣ ಕಟ್ಟುತ್ತಿರುವ ಮಧ್ಯದಲ್ಲೇ ಮರಣ ಸಂಭವಿಸಿದರೆ ಏನಾಗುತ್ತದೆ ಎಂಬುದು ಸಹಜವಾಗಿಯೇ ಎಲ್ಲರ ಪ್ರಶ್ನೆಯಾಗಿದೆ. ಆದರೆ ಇದಕ್ಕೆ ಸರ್ಕಾರ ತನ್ನದೇ ಆದ ಸರಳ ನಿಯಮವನ್ನು ರೂಪಿಸಿಕೊಂಡಿದೆ. ಒಂದು ವೇಳೆ ಯೋಜನೆಯ ನಡುವಿನಲ್ಲೇ ಫಲಾನುಭವಿ ಮರಣ ಹೊಂದಿದರೆ ಆತನ ಪತ್ನಿಯು ಯೋಜನೆಗೆ ಹಣ ಕಟ್ಟುವ ಮೂಲಕ ಯೋಜನೆಯನ್ನು ಮುಂದುವರೆಸಬಹುದು. ಆದರೆ ಒಂದು ವೇಳೆ ಪತ್ನಿಯು ಯೋಜನೆಯಲ್ಲಿ ಮುಂದುವರೆಯಲು ಇಚ್ಚಿಸದಿದ್ದರೆ ಈಗಾಗಲೇ ಕಟ್ಟಿದ ಹಣವನ್ನು ಬಡ್ಡಿ ಸಮೇತ ಮರಳಿಸಲಾಗುತ್ತದೆ.
ಎಷ್ಟು ಹಣವನ್ನು ಠೇವಣಿ ಇಡಬೇಕು?
ಒಂದು ವೇಳೆ ನೀವು ಫಲಾನುಭವಿ 18 ವರ್ಷ ವಯಸ್ಸಿವರಾಗಿದ್ದರೆ ಪ್ರತೀ ತಿಂಗಳು 55 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಅದೇ ರೀತಿ ಫಲಾನುಭವಿ 29 ವರ್ಷ ವಯಸ್ಸಿನವರಾಗಿದ್ದರೆ 100 ರೂ.ಗಳನ್ನು ಠೇವಣಿ ಇಡಬೇಕಾಗುತ್ತದೆ. ಇನ್ನು ಫಲಾನುಭವಿ 40 ವರ್ಷದವನಾಗಿದ್ದರೆ ವ್ಯಕ್ತಿಯು ಪ್ರತೀ ತಿಂಗಳು 200 ರೂ. ಠೇವಣಿ ಇಡಬೇಕು ಎಂದು ಸರ್ಕಾರವು ನಿಯಮ ರೂಪಿಸಿದೆ.
ಇನ್ನು ಇಲ್ಲಿ ಒಂದು ವಿಷಯವನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ. ನಾವು ಎಷ್ಟು ವರ್ಷ ವಯಸ್ಸಿನವರಾಗಿದ್ದು, ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸುತ್ತಿದ್ದರೆ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ಠೇವಣಿ ಇಡುತ್ತದೆ. ಇನ್ನು ವ್ಯಕ್ತಿಯು 18ರಿಂದ 40ರ ಒಳಗಿನ ವಯಸ್ಸಿನರಾಗಬೇಕಿದ್ದು, ಆದಾಯ ತೆರಿಗೆ ಪಾವತಿದಾರನಾಗಿರಬಾರದು. ಮೊಬೈಲ್ ಫೋನ್, ಆಧಾರ್ ಸಂಖ್ಯೆ ಮತ್ತು ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಲ್ಲದೆ ಅರ್ಜಿದಾರರ ಮಾಸಿಕ ಆದಾಯ ರೂ 15,000 ಮೀರಬಾರದು.
ಯಾವೆಲ್ಲಾ ದಾಖಲೆಗಳ ಅಗತ್ಯವಿದೆ?
ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಹಲವು ದಾಖಲೆಗಳನ್ನು ನೀಡಬೇಕಾಗಿರುವುದು ಸಾಮಾನ್ಯ ಸಂಗತಿ. ಅದೇ ರೀತಿ ಈ ಯೋಜನೆಗೂ ಇದು ಅನ್ವಯವಾಗುತ್ತದೆ. ಇನ್ನು ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಪಾಸ್ಬುಕ್, ಮೇಲ್ ಐಡಿ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಈ ಯೋಜನೆಯ ಲಾಭ ಪಡೆಯಲು maandhan.in ವೆಬ್ಸೈಟ್ಗೆ ಲಾಗಿನ್ ಆಗಬೇಕು. ಅಲ್ಲಿ ಸ್ವಯಂ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ, ಇದೇ ಸಮಯದಲ್ಲಿ ಮೊಬೈಲ್ ಬಂದ ಒಟಿಪಿ ನಮೂದಿಸಿ ನೊಂದಾಯಿಸಬಹುದು. ಬಳಿಕ ಆನ್ ಲೈನ್ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ, ಸಲ್ಲಿಸಬೇಕು.
ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ ವಿವಿಧ ಯೋಜನೆಗಳು: ಅರ್ಜಿ ಸಲ್ಲಿಸೋದು ಹೇಗೆ?
ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ ವಿವಿಧ ಯೋಜನೆಗಳು: ಅರ್ಜಿ ಸಲ್ಲಿಸೋದು ಹೇಗೆ?
ಪ್ರತಿಯೊಬ್ಬರಿಗೂ ಸ್ವಂತ ಸೂರು ಇರಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮನೆ ಇಲ್ಲದ ಅರ್ಹರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರ ಅನುದಾನವನ್ನು ನೀಡುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಮಂದಿ ಬಡವರಿ ಈ ಯೋಜನೆಗಳು ಅನುಕೂಲವಾಗಿದ್ದು, ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಡಾ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ(ಬಸವ ವಸತಿ ಯೋಜನೆ), ದೇವರಾಜ್ ಅರಸು ವಸತಿ ಯೋಜನೆ ಹಾಗೂ ಡಾ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ ಹೀಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವ ಹಲವು ಯೋಜನೆಗಳು ಚಾಲ್ತಿಯಲ್ಲಿವೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಉದ್ದೇಶವೆಂದರೆ ಗ್ರಾಮೀಣ ಭಾಗದ ಕುಟುಂಬಗಳಿಗೆ ಅವರ ಕನಸಿನ ಮನೆ ಕಟ್ಟಿಸಿಕೊಡುವುದಾಗಿದೆ. ಅಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಮನೆಯ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪಾಳುಬಿದ್ದ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯವೂ ಈ ಯೋಜನೆಯಲ್ಲಿ ಸೇರಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷದ ಬಜೆಟ್ ಗಳಲ್ಲಿ ವಸತಿ ಯೋಜನೆಗಳಿಗಾಗಿಯೇ ಇಂತಿಷ್ಟು ಹಣವನ್ನು ಮೀಸಲಿಡುತ್ತವೆ. ಆಯಾ ವರ್ಷಗಳಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಅಥವಾ ಆರ್ಥಿಕ ನೆರವಿನ ಮೂಲಕ ಬಡವರ ಸ್ವಂತ ಮನೆಯ ಕನಸನ್ನು ನನಸು ಮಾಡುತ್ತಿವೆ.
ವಸತಿ ರಹಿತರು ಮನೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
ರಾಜೀವ್ ಗಾಂಧಿ ವಸತಿ ಯೋಜನೆ
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ-ಆರ್ ಜಿಆರ್ ಎಚ್ ಸಿಎಲ್ ಯಲ್ಲಿ ವಸತಿ ರಹಿತರು ಮನೆಗಾಗಿ ಅರ್ಜಿ ಸಲ್ಲಿಸಬಹುದು.
ಮೊದಲು ಆರ್ ಜಿಆರ್ ಎಚ್ ಸಿಎಲ್ ವೆಬ್ ಸೈಟ್ ಗೆ ಭೇಟಿ ನೀಡಿ
ನೋಂದಣಿ ಅಥವಾ ಆನ್ ಲೈನ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಿ
ಹೆಸರು, ಲಿಂಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ
ವಿಳಾಸ, ವಾರ್ಷಿಕ ಆದಾಯ ಹಾಗೂ ಆಧಾರ್ ಸಂಖ್ಯೆಯನ್ನು ತಪ್ಪಿದೆ ನಮೂದಿಸಬೇಕು
ಇದಾದ ಬಳಿಕ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ
ಸರ್ಕಾರ ವಸತಿ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)
ಈ ಯೋಜನೆಯ ಅಡಿಯಲ್ಲಿ ಮನೆಯನ್ನು ಪಡೆಯಲು ನಿಮ್ಮ ಪಂಚಾಯಿತಿಗೆ ಭೇಟಿ ನೀಡಿ ಮನೆಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಿಎಂಎವೈ ಯೋಜನೆಯ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಲಾಗುತ್ತದೆ
ಕರ್ನಾಟಕ ಸರ್ಕಾರವು ಪಿಎಂಎವೈ ಅಡಿಯಲ್ಲಿ ನಿರ್ಮಿಸಲಾಗುವ ಪ್ರತಿ ಮನೆಗೆ 3.5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುತ್ತದೆ
Raghavendra M Y
Sunday, September 1, 2024
Thursday, August 29, 2024
Thursday, July 6, 2023
Thursday, December 8, 2022
ಸರ್ಕಾರಿ ನೌಕರರು/ Govrnment Employees
ಸರ್ಕಾರಿ ನೌಕರರು/ Govrnment Employees
ಕ್ರಮ ಸಂಖ್ಯೆ Serial No |
ಹುದ್ಧೆ Designation |
ಗ್ರೂಪ್ Group |
Payscale |
5ನೇ ವೇತನ ಆಯೋಗ |
6ನೇ ವೇತನ ಆಯೋಗ |
7ನೇ ವೇತನ ಆಯೋಗ |
1 |
ಆಯುಕ್ತರು |
A |
|
|
|
|
2 |
ಜಂಟಿ ನಿರ್ದೇಶಕರು |
A |
74400-109600 |
40050-56550 |
74400-109600 |
? |
3 |
ಉಪ ನಿರ್ದೇಶಕರು |
A |
67550-104600 |
36300-53550 |
67550-104600 |
? |
4 |
ಮುಖ್ಯ ಲೆಕ್ಕಾಧಿಕಾರಿಗಳು |
A |
67550-104600 |
36300-53550 |
67550-104600 |
? |
5 |
ಲೆಕ್ಕಾಧಿಕಾರಿ |
A |
52650-97100 |
28100-50100 |
52650-97100 |
? |
6 |
ಸಹಾಯಕ ನಿರ್ದೇಶಕರು/ ಜಿಲ್ಲಾ ಹಿಂದುಳಿದ ವರ್ಗಗಳ
ಕಲ್ಯಾಣಾಧಿಕಾರಿಗಳು |
A |
52650-97100 |
28100-50100 |
52650-97100 |
? |
7 |
ಪ್ರಾಶುಪಾಲರು(PETC) |
A |
52650-97100 |
28100-50100 |
52650-97100 |
? |
8 |
ಸೀನಿಯರ್ ಪ್ರೊಗ್ರಾಮರ್ |
A |
52650-97100 |
28100-50100 |
52650-97100 |
? |
|
|
|
|
|
|
|
9 |
ಪತ್ರಾಂಕಿತ ವ್ಯವಸ್ಥಾಪಕರು/
ತಾಲ್ಲೂಕಾ ಹಿಂದಿಳಿದ ವರ್ಗಗಳ ಕಲ್ಯಾಣಾಧಿಕಾರಿಗಳು |
B |
43100-83900 |
22800-43200 |
43100-83900 |
? |
10 |
ಸಹಾಯಕ ನಿರ್ದೇಶಕರು ( ಯೋ.ಸಾಂ) |
B |
43100-83900 |
22800-43200 |
43100-83900 |
? |
11 |
ಜೂನಿಯರ್ ಪ್ರೊಗ್ರಾಮರ್ |
B |
43100-83900 |
22800-43200 |
43100-83900 |
? |
12 |
ಲೆಕ್ಕ ಅಧೀಕ್ಷಕರು |
B |
43100-83900 |
21600-40050 |
43100-83900 |
? |
|
|
|
|
|
|
|
13 |
ಕಛೇರಿ ಮೇಲ್ವಿಚಾರಕರು/ ಹಿಂದುಳಿದ
ವರ್ಗಗಳ ವಿಸ್ತರಣಾಧಿಕಾರಿಗಳು |
C |
37900-70850 |
20000-36300 |
37900-70850 |
? |
14 |
ನಿಲಯ ಪಾಲಕರು |
C |
37900-70850 |
20000-36300 |
37900-70850 |
? |
15 |
ನಿಲಯ ಮೇಲ್ವಿಚಾರಕರು |
C |
27650-52650 |
14550-26700 |
|
44425-83700 |
16 |
ಕಿರಿಯ ಇಂಜಿನಿಯರ್ ( ಸಿವಿಲ್) |
C |
33450-62600 |
17650-32000 |
33450-62600 |
? |
17 |
ಮಹಿಳಾ ಕಲ್ಯಾಣ ಕೇಂದ್ರ ಸಂಚಾಲಕರು |
C |
21400-42000 |
11600-21000 |
21400-42000 |
? |
18 |
ಶೀಘ್ರಾಲಿಪಿಗಾರರು |
C |
27650-52650 |
14550-26700 |
27650-52650 |
? |
19 |
ಸಾಂಖ್ಯಿಕ ನಿರೀಕ್ಷಕರು |
C |
27650-52650 |
14550-26700 |
27650-52650 |
? |
20 |
ಪ್ರಥಮ ದರ್ಜೆ ಸಹಾಯಕರು ( ಲೆಕ್ಕಪತ್ರ) |
C |
27650-52650 |
14550-26700 |
27650-52650 |
? |
21 |
ಆಶ್ರಮ ಶಾಲಾ ಶಿಕ್ಷಕರು |
C |
23500-47650 |
12500-24000 |
23500-47650 |
? |
22 |
ಹೊಲಿಗೆ ತರಬೇತಿ ಶಿಕ್ಷಕರು |
C |
23500-47650 |
12500-24000 |
23500-47650 |
? |
23 |
ದ್ವಿತಿಯ ದರ್ಜೆ ಸಹಾಯಕರು ( ಲೆಕ್ಕಪತ್ರ) |
C |
21400-42000 |
11600-21000 |
21400-42000 |
? |
24 |
ಕಿರಿಯ ನಿಲಯ ಮೇಲ್ವಿಚಾರಕರು |
C |
21400-42000 |
11600-21000 |
21400-42000 |
34100-67600 |
25 |
ಬೆರಳಚ್ಚುಗಾರರು |
C |
21400-42000 |
11600-21000 |
21400-42000 |
? |
26 |
ಡೇಟಾ ಎಂಟ್ರಿ ಆಪರೇಟರ್ |
C |
21400-42000 |
11600-21000 |
21400-42000 |
? |
27 |
ವಾಹನ ಚಾಲಕರು |
C |
21400-42000 |
11600-21000 |
21400-42000 |
? |
|
|
|
|
|
|
|
28 |
ಅಡುಗೆಯವರು |
D |
18600-32600 |
10400-16400 |
18600-32600 |
34100-67600 |
29 |
ಅಡುಗೆ ಸಹಾಯಕರು |
D |
17000-28950 |
9600-14550 |
17000-28950 |
27000-46675 |
30 |
ರಾತ್ರಿ ಕಾವಲುಗಾರರು |
D |
17000-28950 |
9600-14550 |
17000-28950 |
27000-46675 |
31 |
ಜವಾನರು |
D |
17000-28950 |
9600-14550 |
17000-28950 |
27000-46675 |
jila panchayat taluka panchayat chunav ane
'ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವಂತೂ ತಯಾರಾಗಿದ್ದೇವೆ' ಎಂದು ಸಿಎಂ ಸಿದ್ದರಾಮ...
-
ಸೋಮಲಿಂಗ್ ಉಪ್ಪಾರ್ ಅವರು ಎಲ್ಲಾ ಮೀಡಿಯಾಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ ಅವರೆಲ್ಲ ಲಿಂಕ್ ಗಳಿಗಾಗಿ ಕೆಳಗಿನವುಗಳನ್ನು ಸಂಪರ್ಕಿಸಬಹುದು 1 https://t.me...
-
ಸರ್ಕಾರಿ ನೌಕರರು / Govrnment Employees ಕ್ರಮ ಸಂಖ್ಯೆ Serial No ಹುದ್ಧೆ Designation ಗ್ರೂಪ್ Group ...
-
ಕರ್ನಾಟಕದಲ್ಲಿರುವ ವಸತಿ ರಹಿತರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ ವಿವಿಧ ಯೋಜನೆಗಳು: ಅರ್ಜಿ ಸಲ್ಲಿಸೋದು ಹೇಗೆ? ಪ್ರತಿಯೊಬ್ಬರಿಗೂ ಸ್ವಂತ...